ಮಹಾಶೈಲ ಸಿನಿ ಸಂಕುಲ ಲಾಂಛನದಲ್ಲಿ ಬಿ.ಮಹದೇವು ಮತ್ತು ಮನುಗೌಡ ಅವರು ನಿರ್ಮಿಸುತ್ತಿರುವ ‘ಚಿಂಗಾರಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಸ್ವಿಜರ್ಲ್ಯಾಂಡ್, ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದ್ದು, ಜನವರಿ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಎ.ಹರ್ಷ ತಿಳಿಸಿದ್ದಾರೆ.
ದರ್ಶನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ದೀಪಿಕಾ ಕಾಮಯ್ಯ, ಭಾವನಾ, ಸೃಜನ್ ಲೋಕೇಶ್, ಯಶಸ್ಸೂರ್ಯ, ಪ್ರದೀಪ್, ರಮೇಶ್ಭಟ್, ಸುಮಿತ್ರ, ಮಧು, ತೇಜು, ವಿಶ್ವ ಮುಂತಾದವರಿದ್ದಾರೆ.
ಚಿತ್ರಕ್ಕೆ ಕಥೆ ಬರೆದಿರುವ ಹರ್ಷ ನೃತ್ಯ ನಿರ್ದೇಶನವನ್ನೂ ಮಾಡಿದ್ದಾರೆ. ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಜೊತೆಗೂಡಿ ಚಿತ್ರಕಥೆ ಸಹ ಬರೆದಿದ್ದಾರೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ‘ಚಿಂಗಾರಿಗೆ ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಸಂಭಾಷಣೆ ಬರೆದಿದ್ದಾರೆ.